ಬುಧವಾರ, ಮೇ 20, 2015

ಸಖಿ ಗೀತೆ.....102

ಸಖಿ...

ಮೋದಿ ಆಜ್ಞಾಪಿಸಿದರು
ಕಾಂಗ್ರೆಸ್ ಮುಕ್ತ ಭಾರತ.

ದಿಲ್ಲಿ ಜನತೆ ಮೋದಿ 
ಆಜ್ಞೆ ಪರಿಪಾಲಿಸಿದರು
ರಾಜಧಾನಿಯನ್ನು
ಕಾಂಗ್ರೆಸನಿಂದ ಮುಕ್ತಗೊಳಿಸಿದರು.

ಮೋದಿ ಶುರುಮಾಡಿದರು
ಸ್ವಚ್ಚ ಭಾರತ ಅಭಿಯಾನ....

ದಿಲ್ಲಿ ಮತದಾರರು ಆ
ಅಭಿಯಾನ ಪೂರ್ಣಗೊಳಿಸಿದರು
ದೇಶ ಮಾರುತ್ತಿರುವ
ಬಿಜೆಪಿಯನ್ನೇ ಗೂಡಿಸಿದರು.

ದಿಲ್ಲಿಗರ ಮೋದಿ ನಿಷ್ಠೆ
ಸದಾ ಹೀಗೆಯೇ ಇರಲಿ.
ಇಂತಹುದೇ ಬದ್ದತೆ
ದೇಶಾದ್ಯಂತ ಹಬ್ಬಲಿ.

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ