ಶುಕ್ರವಾರ, ಮೇ 22, 2015

ಸಖಿ ಗೀತೆ.....133

ಸಖಿ....

ದ್ವೇಷ ಬಿತ್ತಿ
ನೆಮ್ಮದಿಯ ಬೆಳೆ
ಬೆಳೆದವರಾರು?

ಮೋಸ ಮಾಡಿ
ಆತ್ಮಸಾಕ್ಷಿಗೆ
ವಂಚಿಸಿದವರಾರು?

ಹಾಲಾಹಲವಾದರೆ ಹಾಲು
ನಂಬಿಕೆ ನೀರು ಪಾಲು
ಹೃದಯ ಚೂರುಚೂರು...

ಅತಿಯಾದ ನಂಬಿಕೆಗೆ ಕುಣಿಕೆ
ಆತ್ಮೀಯರು ಕೊಟ್ಟ ಕಾಣಿಕೆ
ಇಂತಾ ಯಾತನೆ ಯಾತಕೆ?

-ಯಡಹಳ್ಳಿ
Like · Comment · 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ