ಸೋಮವಾರ, ಮೇ 25, 2015

ಸಖಿ ಗೀತೆ.... 224

ತರಲೆ ಕಾವ್ಯ.....!!

ಸಖಿ.....

ಅಪ್ಪನ ತಲೆಯಲಿ
ಬೆಳ್ಳಿ ಕೂದಲ ಕಂಡು
ಬೆರಗಾಗಿ ಕೇಳಿತು ಕಂದಾ
"ಅಪ್ಪಾ ಅಪ್ಪಾ
ಕಪ್ಪು ತಲೆಯಲಿ
ಬಿಳಿ ಕೂದಲು ಯಾಕಪ್ಪಾ?.."

"ಅಯ್ಯೋ ಕಂದಾ
ನೀನೀಗ ಹುಸಿಯಾಡುವುದು
ಕಲಿತಿರುವೆ
ಮಗ ಹೇಳುವ ಪ್ರತಿ
ಸುಳ್ಳಿಗೊಂದೊಂದು ಅಪ್ಪನ
ಕೂದಲು ನೆರೆಯುವುದು.."

ಅಪ್ಪನ ಮಾತು ಕೇಳಿದ
ಕಂದ ಕೌತುಕದಿಂದ
ಪ್ರಶ್ನಿಸಿತು....
"ಹೌದಾ ಅಪ್ಪಾ
ಗೊತ್ತಾಯ್ತು ಈಗ
ತಾತನ ತಲೆಯಾಕೆ
ಪೂರ್ತಿ ಬೆಳ್ಳಗೆ..
ಹಾಗಾದರೆ ಹೇಳು
ನೀನೆಷ್ಟೊಂದು ಸುಳ್ಳು
ಹೇಳಿರುವೆ...."

ಬೆಪ್ಪಾದ ಅಪ್ಪನ
ಬಾಯಿ ಕಟ್ಟಿತು,
ಬೊಚ್ಚುಬಾಯಿಯ ಅಜ್ಜ
ಮುಸಿಮುಸಿ ನಕ್ಕಿತು...

ಮಕ್ಕಳ ಮುಂದೆ
ಅತಿಜಾಣತನ ಸಲ್ಲದು
ಎಂಬುದೇ ಈ ತರಲೆ
ಕವಿತೆಯ ಅರ್ಥವು.....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ