ಸೋಮವಾರ, ಮೇ 25, 2015

ಸಖಿ ಗೀತೆ... 219

ಸಖಿ...

ಕಾಡತಾವ
ನೆನಪ ಬಳ್ಳಿ,
ಮುಚ್ಚಿದರೆ
ಕಣ್ಮುಂದೆ
ನನ್ನದೇ ಹಳ್ಳಿ.....

ಆ ದಿನಗಳಲಿ
ಅನುಕೂಲಗಳಿರಲಿಲ್ಲ,
ಬದುಕು
ಹಸನಾಗಿತ್ತು....
ಸಂಬಂಧ
ಹಸಿರಾಗಿತ್ತು...

ಓಟಿನ ರಾಜಕೀಯ
ಹಳ್ಳಿ ತುಂಬ ಹರದಾಡಿ
ಬಲವಾಗಿ ಬೀಸಿತು
ಆಧುನಿಕತೆಯ ಗಾಳಿ....

ಈಗಲೂ ಹಳ್ಳಿಯಿದೆ
ಆಗಿನಂತಿಲ್ಲ,
ಗುಟ್ಕಾ ಮಟ್ಕಾ ಅಮಲು
ಅವಿಧೇಯತೆಯ ಗಮಲು
ಊರಲ್ಲೆಲ್ಲಾ ಹುಡುಕಿದರೂ
ಇಲ್ಲ ನೆಮ್ಮದಿ ಬರೀ ದಿಗಿಲು...

ಎಲ್ಲೆಂದರಲ್ಲಿ
ಮನೆ ಮನಗಳಲಿ
ಕಿತ್ತು ಬಿದ್ದಿವೆ
ಕರುಳ ಬಳ್ಳಿ,
ಹೇಗೆಕಾಯ್ತು ನಾ
ಪ್ರೀತಿಸಿದ ಹಳ್ಳಿ.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ