ಸೋಮವಾರ, ಮೇ 25, 2015

ಸಖಿ ಗೀತೆ.....227

ಸಖಿ...

ಪುಟ್ಟ ಮಗುವೊಂದು
ಗಟ್ಟಿಯಾಗಿ ಕೇಳಿತು
'ಹಣ್ಣು ಹೂ ನೆರಳ
ಕೊಡುವ ಮರವೇ
ಇದರಿಂದ ನಿನಗೇನು
ಲಾಭ ಸಿಕ್ಕೀತು....?
ಎಂಥಾ ಸುಖವದು
ದಕ್ಕೀತು....?'

''ಕಂದ ನಿನ್ನ ಮಾತು
ಬಲು ಚೆಂದ,
ಕೊಟ್ಟು
ತೆಗೆದುಕೊಳ್ಳುವುದು
ವ್ಯಾಪಾರ....

ಪ್ರತಿಫಲ ಬಯಸದೇ
ಕೊಡುವುದು
ಪರೋಪಕಾರ.....

ಪ್ರಯೋಜನ ಪಡೆದೂ
ವಿನಾಶ ಮಾಡುವುದು
ಮನುಷ್ಯರ ಮನೋವಿಕಾರ.....!''

ನೊಂದು ನುಡಿಯಿತು
ಚೆಂದದ ಮರ
ತಲೆತಗ್ಗಿಸಿತು
ಅಂದದ ಮಗು....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ