ಸೋಮವಾರ, ಮೇ 25, 2015

ಸಖಿ ಗೀತೆ....240

ಸಖಿ....

ಹೋಗಲಿ ಬಿಡು...
ವಂಚಕರ ಸಂಚಿಗೆಂದೂ
ಕೊನೆ ಎಂಬುದಿಲ್ಲ,
ನಂಬಿಕೆ ದ್ರೋಹಕ್ಕಿಂತ
ಪಾತಕ ಇನ್ನೊಂದಿಲ್ಲ....!

ಎಚ್ಚರದಿಂದಿರಬೇಕು...
ಉರಿವ ಮನೆ ಗಳ ಬಳಸಿ
ಉಯ್ಯಾಲೆ ಆಡುವವರುಂಟು,
ಸೂತಕದ ಮನ ಗುಡಿಸಿ
ಕಟ್ಟುತ್ತಾರೆ ಲಾಭದ ಗಂಟು....!!

ಗೊಂದಲದಲ್ಲಿದ್ದೇನೆ...
ಯಾರನ್ನ ನಂಬಬೇಕು
ನಂಬದಿರಬೇಕು,
ನಂಬಿದವರೇ ಬೆನ್ನಿಗಿರಿದಾಗ
ಇನ್ನಾರನ್ನು ನನ್ನವರೆನಬೇಕು....!!!

ಆದರೂ ಇದೆ ಭರವಸೆ...
ಇಂದಿಲ್ಲ ನಾಳೆ ಎಂದಾದರೊಂದಿನ
ನಂಬಿಗಸ್ತರು ಜೊತೆಯಾಗುತ್ತಾರೆ,
ಆಸೆಯ ತೀರವೇರಿ ಕಾಯುತ್ತಿರುವೆ
ಕೆಸರ ಕೊಳದೊಳಗೆ ಅರಳಬೇಕಿದೆ ತಾವರೆ....!!!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ