ಸಖಿ...
ಕಪ್ಪೆಯೊಂದು
ಹೆಮ್ಮರವನೊಂದು
ಏರತೊಡಗಿತು...
ಹೆಮ್ಮರವನೊಂದು
ಏರತೊಡಗಿತು...
ಕಪ್ಪೆ ಬಳಗ ಒಂದಾಗಿ
'ಸಾಧ್ಯವಿಲ್ಲ ಸಾಧುವಲ್ಲ'ವೆಂದು
ಕೂಗತೊಡಗಿತು...
'ಸಾಧ್ಯವಿಲ್ಲ ಸಾಧುವಲ್ಲ'ವೆಂದು
ಕೂಗತೊಡಗಿತು...
ಹೊಸ ಹುರುಪಿನಿಂದ
ಜಿಗಿಜಿಗಿದು ಕಪ್ಪೆ
ಗಮ್ಯ ತಲುಪಿತು...
ಜಿಗಿಜಿಗಿದು ಕಪ್ಪೆ
ಗಮ್ಯ ತಲುಪಿತು...
ಕಪ್ಪೆ ಸಾಹಸ ಕಂಡು
ಬೆರಗಾದ ಬಳಗ
'ಹೇಗೆ ಸಾಧ್ಯ'ವೆಂದು ಕೇಳಿತು..
ಬೆರಗಾದ ಬಳಗ
'ಹೇಗೆ ಸಾಧ್ಯ'ವೆಂದು ಕೇಳಿತು..
'ನೀವು ಕೊಟ್ಟ ಪ್ರೇರಣೆ
ಸಾಧ್ಯವಾಯ್ತು ಸಾಧನೆ'
ಬಳಗಕೆ ಕಪ್ಪೆ ನಮಿಸಿತು....
ಸಾಧ್ಯವಾಯ್ತು ಸಾಧನೆ'
ಬಳಗಕೆ ಕಪ್ಪೆ ನಮಿಸಿತು....
ಬಳಗದ ನಿರುತ್ಸಾಹದ ಮಾತ
ಪ್ರೋತ್ಸಾಹವೆಂದುಕೊಂಡು
ಕೆಪ್ಪ ಕಪ್ಪೆ ತಪ್ಪು ತಿಳಿದು...
ಪ್ರೋತ್ಸಾಹವೆಂದುಕೊಂಡು
ಕೆಪ್ಪ ಕಪ್ಪೆ ತಪ್ಪು ತಿಳಿದು...
ಉತ್ಸಾಹ ಹೆಚ್ಚಾಗಿ
ಉತ್ತುಂಗಕ್ಕೇರಿ ಅಸಾಧ್ಯವನ್ನು
ಸಾಧ್ಯಮಾಡಿತು...
ಉತ್ತುಂಗಕ್ಕೇರಿ ಅಸಾಧ್ಯವನ್ನು
ಸಾಧ್ಯಮಾಡಿತು...
ನಿರುತ್ಸಾಹಕ್ಕೆ ಕಿವುಡರಾಗಿ
ಸಾಧನೆಯತ್ತ ಮುಂದೆ ಸಾಗಿ
ಎಂಬುದೇ ಈ ಕವಿತೆ ನೀತಿಯು...
ಸಾಧನೆಯತ್ತ ಮುಂದೆ ಸಾಗಿ
ಎಂಬುದೇ ಈ ಕವಿತೆ ನೀತಿಯು...
-ಶಶಿ ಯಡಹಳ್ಳಿ
(ಕೆಪ್ಪ =ಕಿವುಡು )
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ