ಸೋಮವಾರ, ಮೇ 25, 2015

ತಬ್ಬಲಿ ಕಂದನ ಆಕ್ರಂದನ :

ತಬ್ಬಲಿ ಕಂದನ ಆಕ್ರಂದನ :

'ತಾಯಂದಿರ ದಿನ ತಾಯಿಗೆ
ಶುಭಾಷಯ ಹೇಳುವುದಿಲ್ಲ,
ನೀನೇ ನನಗೆ ತಾಯಿ ತಂದೆ ಎಲ್ಲಾ...'
ಎಂದು ಮಗು ಅಪ್ಪನನ್ನು ಅಪ್ಪಿಕೊಂಡಿತು

'ಬರೀ ಹೆತ್ತರೆ ಸಾಕೇನಪ್ಪಾ?
ಕಂದನ ತೊರೆದವಳು ತಾಯೇನಪ್ಪ?
ಹೆತ್ತವಳಿಗೆ ಕರುಣೆ ಇಲ್ಲೇನಪ್ಪಾ?..'
ತಬ್ಬಲಿ ಕಂದ ತಂದೆಯನ್ನು ತಬ್ಬಿಕೊಂಡಿತು..

'ತಾಯಿ ದೇವರು ಅಂತಾರಪ್ಪ
ದೇವರಿಗೂ ದ್ವೇಷ ಉಂಟೇನಪ್ಪ?
ತಾಯಿದ್ದೂ ನಾ ತಬ್ಬಲಿ ಯಾಕಪ್ಪಾ?'
ತಾಯಿ ತೊರೆದ ಕಂದ ಕಣ್ಣೀರಾಯಿತು...

''ಹೇಳು ತಂದೆ ಮಾರಿಯನ್ಯಾಕೆ ಕರೆತಂದೆ ?
ನನ್ನನ್ಯಾಕೆ ಈ ಭೂಮಿಗೆ ಎಳೆತಂದೆ?
ನಡೆ ನೀ ಮುಂದೆ ನಾ ನಿನ್ನ ಬೆನ್ನಿಂದೆ...''
ನೊಂದ ಕಂದ ತಂದೆಯ ಹೆಗಲೇರಿತು....

''ಹೋಗಲಿ ಬಿಡು ಕಂದಾ
ನಿನ್ನ ನಗುವೆನಗೆ ಮಹದಾನಂದ.
ಪಡಬೇಡ ವ್ಯಥೆ ಆಕೆ ನಿಜವಾಗಿ ದೇವತೆ,
ಕಲ್ಲೆದೆಯ ದೇವರಿಗೆ ಕರುಣೆ ಭಾವನೆಗಳ ಕೊರತೆ...''
ನೊಂದ ತಂದೆ ಕಂದನ ಸಂತೈಸಿತು.

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ