ಸೋಮವಾರ, ಮೇ 25, 2015

ಸಖಿ ಗೀತೆ....237

ಸಖಿ...

ನಿನಗೇನು ಬೇಕೆಂದು
ಕೇಳಿ ತಿಳಿದು
ಕೊಡುವವರಿಗಿಂತ,
ಬೇಕೆಂಬುದೇನೆಂದು
ಅರಿತು ಕೊಡುವವರು
ಹೆಚ್ಚು ಪ್ರೀಯರು....!

ವಿನೋದದಾಳದ ವಿಷಾದ
ನಗೆಯೊಳಗಿನ ನೋವು
ಮಾತೊಳಗಿನ ಮೌನವನು
ಹೇಳದೇ ತಿಳಿದು
ಪರಿಹರಿಸುವವರು
ನಿಜವಾದ ದೇವರು....!!

ಹಸಿವಿಗೆ ತಿನಿಸಿ
ಮುನಿಸಿಗೆ ನಗಿಸಿ
ರೌದ್ರದಿ ರಮಿಸಿ
ಸಂಕಷ್ಟದಿ ಸಂತೈಸಿ
ಜೊತೆಯಾಗುವವರು
ಶಿವ ಶರಣರು....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ