ಸೋಮವಾರ, ಮೇ 25, 2015

ಸಖಿ ಗೀತೆ...208

ಸಖಿ...

ಮುಂದೊಮ್ಮೆ ತಿನ್ನುವ
ಅನ್ನ ಮಾರುತ್ತಾರೆಂಬ
ಮುತ್ತಾತನ ಮಾತು
ನಿಜವಾಯ್ತು, ಆಹಾರ
ಊರು ಕೇರಿಗಳ
ಗಲ್ಲಿಗಲ್ಲಿಗಳಲಿ
ಮಾರಾಟದ
ಸರಕಾಯಿತು....!

ಮುಂದಿನ ದಿನಮಾನ
ಕುಡಿಯುವ ನೀರಿಗೂ
ಕಾಸು ಕೊಡಬೇಕೆನ್ನುವ
ತಾತನ ಮಾತೂ
ವಾಸ್ತವವಾಯ್ತು, ಈಗ
ಎಲ್ಲಿ ನೋಡಿದರಲ್ಲಿ
ಬಿಕರಿಯಾಗುವ ನೀರು
ಲಾಭಕೋರರ
ದಂದೆಯಾಯಿತು......!!

ಮುಂಬರುವ ಕಾಲದಲಿ
'ಉಸಿರಾಡುವ ಗಾಳಿಗೂ
ತೆರಬೇಕಿದೆ ತೆರಿಗೆ' ಎಂದು
ಅಪ್ಪ ಹೇಳುತ್ತಿದ್ದಾನೆ.
ಈ ಮಾತೊಂದಾದರೂ
ಸುಳ್ಳಾಗಲೆಂದು
ಇಲ್ಲದ ದೇವರಲ್ಲಿ
ಪ್ರಾರ್ಥಿಸುತ್ತಿದ್ದೇನೆ,
ಹುಸಿಹೋಗಲಾರದೆಂದು
ಪರಿತಪಿಸುತ್ತಿದ್ದೇನೆ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ