ಸೋಮವಾರ, ಮೇ 25, 2015

ಸಖಿ ಗೀತೆ....223

ಸಖಿ.....

ಮನುಜನ
ಬದುಕು
ಕೊನೆಯಾಗುವುದು
ಸತ್ತಾಗೆಂಬುದು
ಮಿತ್ಯ....!

ಆತ್ಮಸಾಕ್ಷಿ
ಮಾರಿಕೊಂಡ ಮನುಷ್ಯ
ಬದುಕಿದ್ದರೂ
ಸತ್ತಂತೆನ್ನುವುದು
ಸೂರ್ಯ ಸತ್ಯ.....!!

ಬದುಕಿದ್ದಾಗಲೇ
ಮೌಲ್ಯ ಕಳೆದುಕೊಂಡು
ಸಾಯುವುದಕ್ಕಿಂತ...
ಮರಣದ ನಂತರ
ಜನಮಾನಸದಲ್ಲಿ
ನೆಲೆಸುವವನೇ ಸಂತ....

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ