ಸೋಮವಾರ, ಮೇ 25, 2015

ಸಖಿ ಗೀತೆ.....222

ಸಖಿ..

ಪಡೆವ
ಉಪಕಾರಕ್ಕೆ
ಪ್ರತ್ಯುಪಕಾರ
ಮಾಡಲಾರೆಯಾದರೆ
ಸಹಾಯ ಬೇಡಬೇಡ
ಸಹಕಾರ ಕೇಳಬೇಡ.....!

ಕೊಡುವುದನ್ನು
ಮರೆತು
ಪಡೆಯುವುದನ್ನೇ
ಕಾಯಕ ಮಾಡಿಕೊಂಡರೆ
ಮತ್ತೆ ಮತ್ತೆ ನಿರೀಕ್ಷೆ
ಮಾಡಬೇಡ ಕೊನೆಗೆ
ನಿರಾಸೆಯಾಗಬೇಡ.....!!

ಕೊಟ್ಟು ಪಡೆಯದ
ಸಂಬಂಧಗಳೆಂದೂ
ಗಟ್ಟಿಯಾಗೋದಿಲ್ಲ...
ಗಾಢ ಗೆಳೆತನ
ನೆಟ್ಟಗಿರೋದಿಲ್ಲ...
ಸ್ವಾರ್ಥಿಗಳ ಸಹವಾಸ
ಮೂರ್ಖರ ಕೆಲಸ........!!!

ಕೊಟ್ಟು ಕೊಟ್ಟು
ಸಾಕಾಯ್ತು
ಇರಲಿ ಅಂತರ.....
ಮರಳಿ ಪಡೆವ
ಆಸೆಗಿಲ್ಲ ಇನಿತು
ಕಾತುರ......
ಭ್ರಮೆ ಕಳೆದು
ಹುಟ್ಟಿತೀಗ
ಹೊಸ ಮನ್ವಂತರ....

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ