ಸೋಮವಾರ, ಮೇ 25, 2015

ಸಖಿ ಗೀತೆ...245

ಸಖಿ....

ಮನುಷ್ಯ ಸತ್ತಾಗ
ಸತ್ತಿದ್ದೇ ಗೊತ್ತಾಗೊಲ್ಲ
ಅನ್ನೊದೇನೋ ಸರಿ.......!

ಬದುಕಿದ್ದಾಗಲೂ
ಬದುಕಿದ್ಯಾರಿಗೂ
ಗೊತ್ತಾಗಲಿಲ್ಲವೆಂದರೆ
ಬದುಕಿ ಏನು ಪ್ರಯೋಜನಾರೀ....?

ಹುಟ್ಟಿನಂತೆ ಸಾವೂ
ನಮ್ಮ ಅಂಕೆಯಲ್ಲಿಲ್ಲ
ಆದರೆ ಬದುಕು ಕೈಲಿದೆ...
ಬೇಕಾದಂತೆ
ಬದಲಾಯಿಸಲು
ಅವಕಾಶವಿದೆ....!!

ಸಮಾಜದೊಳತಿಗಾಗಿ
ಶ್ರಮಿಸಬೇಕಿದೆ...
ಮನುಷ್ಯ ಸತ್ತಮೇಲೂ
ಬದುಕಬೇಕಿದೆ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ