ಸೋಮವಾರ, ಮೇ 25, 2015

ಸಖಿ ಗೀತೆ....244

ಸಖಿ...

ಹೀಗೊಂದು
ನ್ಯಾಯಾಲಯ
'ಅಮ್ಮ' ನನ್ನು
ದೋಷಿ ಎಂದರೆ
ಮತ್ತೊಂದು
ನಿರ್ದೋಷಿ ಎಂದು
ಬಿಡುಗಡಿಸುತ್ತದೆ...

ಭಾರೀ ಭ್ರಷ್ಟಾಚಾರಿ
ಭಾಗ್ಯವಂತರಿಗೆ
ತಕ್ಷಣ ಜಾಮೀನು ...

ಜುಜಬೀ ಚಿಲ್ಲರೆ
ಅಪರಾಧಿಗಳಿಗೆ
ಶಿಕ್ಷೆ ಜೈಲು...

ಭವ್ಯ ಭಾರತದ
ಘನ ನ್ಯಾಯಾಲಯದಲ್ಲಿ
ನ್ಯಾಯ ಮಾರಾಟಕ್ಕಿದೆ....!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ