ಸಖೀ...
ತೋಳವೊಂದು ಹೊಂಚು ಹಾಕಿ
ಮುದ್ದಿನ ಮರಿಯ ಹೊತ್ತೊಯ್ಯಿತು
ಮುದ್ದಿನ ಮರಿಯ ಹೊತ್ತೊಯ್ಯಿತು
ನರಿಯೊಂದು ನಯಗಾರಿಕೆ ತೋರಿ
ಕರುಳ ಕುಡಿಯ ಕತ್ತರಿಸಿತು...
ಕರುಳ ಕುಡಿಯ ಕತ್ತರಿಸಿತು...
ಹಾವೊಂದು ದ್ವೇಷ ತಾಳಿ
ಮನೆಯ ಬೆಳಕ ನಂದಿಸಿತು..
ಮನೆಯ ಬೆಳಕ ನಂದಿಸಿತು..
ಗಿಡುಗವೊಂದು ಮರುಳು ಮಾಡಿ
ಮರಿಯ ಮಾಯ ಮಾಡಿತು...
ಮರಿಯ ಮಾಯ ಮಾಡಿತು...
ಶಕುನಿಯೊಂದು ದಾಳ ಹಾಕಿ
ಕಂದನ ದಾರಿ ತಪ್ಪಿಸಿತು.
ಕಂದನ ದಾರಿ ತಪ್ಪಿಸಿತು.
ಪಾಪ ಅಪ್ಪ ರೋಧಿಸುತಿಹನು
ಹೋದ ಕೂಸು ಮರಳಲಿಲ್ಲ
ಹೋದ ಕೂಸು ಮರಳಲಿಲ್ಲ
ಮತ್ತೆ ಬರುವಳೆಂದು ಕಾಯುತಿಹನು
ಕಟುಕರಿಗೆ ಕರುಣೆಯಿಲ್ಲ....
ಕಟುಕರಿಗೆ ಕರುಣೆಯಿಲ್ಲ....
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ