ಹತಭಾಗ್ಯ ತಂದೆಯ ತಲ್ಲಣ :
ನನ್ನೆದೆಗೆ ಚೂರಿ ಹಾಕಿದ್ದು
ನನ್ನವರೇ ಹೊರತು....
ಬೇರೆಯವರಿಗೆಲ್ಲಿತ್ತು
ಮನಸೊಡೆಯುವ ತಾಕತ್ತು.
ಹೊರಗಿನವರ ಸಂಚಿಗೆ
ಬಲಿಯಾಯ್ತು ನಿಯತ್ತು !
ನನ್ನವರೇ ಹೊರತು....
ಬೇರೆಯವರಿಗೆಲ್ಲಿತ್ತು
ಮನಸೊಡೆಯುವ ತಾಕತ್ತು.
ಹೊರಗಿನವರ ಸಂಚಿಗೆ
ಬಲಿಯಾಯ್ತು ನಿಯತ್ತು !
ಅದಕ್ಕೆ ಹೇಳುವುದು
ಜೊತೆಯಲ್ಲೇ ಇರ್ತಾರೆ
ನಂಬಿಕೆದ್ರೋಹಿಗಳು, ವಂಚಕರು
ಹೊತ್ತು ನೋಡಿ ಕತ್ತು ಕೊಯ್ತಾರೆ !!
ಜೊತೆಯಲ್ಲೇ ಇರ್ತಾರೆ
ನಂಬಿಕೆದ್ರೋಹಿಗಳು, ವಂಚಕರು
ಹೊತ್ತು ನೋಡಿ ಕತ್ತು ಕೊಯ್ತಾರೆ !!
ನಂಬಿದವರೇ ವಂಚಕರಾದರೆ
ಯಾರನ್ನ ನಂಬುವುದು?
ಕರುಳಬಳ್ಳಿ ಕತ್ತಿಗೆ ಕುಣಿಕೆಯಾದರೆ
ಯಾರಿಗಾಗಿ ಬದುಕುವುದು?
ಯಾರನ್ನ ನಂಬುವುದು?
ಕರುಳಬಳ್ಳಿ ಕತ್ತಿಗೆ ಕುಣಿಕೆಯಾದರೆ
ಯಾರಿಗಾಗಿ ಬದುಕುವುದು?
ಹೊರಗಿನವರಾದರೆ ಶತ್ರು
ದಿಟ್ಟವಾಗಿ ಎದುರಿಸಬಹುದು..
ಕರುಳಕುಡಿ ಎದುರಾಳಿಯಾದರೆ
ಯಾರಿಗಾಗಿ ಕಾದಾಡುವುದು ?
ದಿಟ್ಟವಾಗಿ ಎದುರಿಸಬಹುದು..
ಕರುಳಕುಡಿ ಎದುರಾಳಿಯಾದರೆ
ಯಾರಿಗಾಗಿ ಕಾದಾಡುವುದು ?
ಯುದ್ಧ ಹೊರಗಿನದಲ್ಲ
ಮನದೊಳಗಿದೆ ತಲ್ಲಣ
ಅತಿಯಾದ ಮಮತೆಯೇ
ಇದಕ್ಕೆಲ್ಲಾ ಕಾರಣ.....!!!!
ಮನದೊಳಗಿದೆ ತಲ್ಲಣ
ಅತಿಯಾದ ಮಮತೆಯೇ
ಇದಕ್ಕೆಲ್ಲಾ ಕಾರಣ.....!!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ