ಸ್ಥಿತ್ಯಂತರ :
ಭಾವಲೋಕದಲ್ಲಿ ಒಳಸುಳಿಗಳ ಹಿಂಡು
ಆಳಕ್ಕಿಳಿದಷ್ಟೂ ಎಳತ ಸೆಳೆತಗಳ ಮಾಯೆ
ವಾಸ್ತವವಾದರೆ ಬೆಂಡು ಅತಿಭಾವುಕತೆ ಗುಂಡು
ಆಳಕ್ಕಿಳಿದು ಮೇಲೆಳದವರ ಕಾಪಾಡು ತಾಯೆ.. ಮಹಾಮಾಯೆ !
ಆಳಕ್ಕಿಳಿದಷ್ಟೂ ಎಳತ ಸೆಳೆತಗಳ ಮಾಯೆ
ವಾಸ್ತವವಾದರೆ ಬೆಂಡು ಅತಿಭಾವುಕತೆ ಗುಂಡು
ಆಳಕ್ಕಿಳಿದು ಮೇಲೆಳದವರ ಕಾಪಾಡು ತಾಯೆ.. ಮಹಾಮಾಯೆ !
* * * * *
ನಡೆದಷ್ಟೂ ಅಂತಿಮ ಗಡಿ ದೂರ
ಕೂತಷ್ಟೂ ಗಡಿಯೇ ಬರುವುದು ಹತ್ತಿರ
ನಿರಂತರ ಕ್ರಿಯಾಶೀಲತೆ ದೀರ್ಘಾಯುಷ್ಯದ ಸತ್ವಸಾರ
ಸಾವಿನ ಗಡಿ ಹುಡುಕಿ ಬಂದಾಗ ಎಲ್ಲರೂ ನಿರುತ್ತರ.
ನಡೆದಷ್ಟೂ ಅಂತಿಮ ಗಡಿ ದೂರ
ಕೂತಷ್ಟೂ ಗಡಿಯೇ ಬರುವುದು ಹತ್ತಿರ
ನಿರಂತರ ಕ್ರಿಯಾಶೀಲತೆ ದೀರ್ಘಾಯುಷ್ಯದ ಸತ್ವಸಾರ
ಸಾವಿನ ಗಡಿ ಹುಡುಕಿ ಬಂದಾಗ ಎಲ್ಲರೂ ನಿರುತ್ತರ.
* * * * *
ಇದು ಮಹಾನಗರದ ಟ್ರಾಫಿಕ್ಕು ಮಾರಾಯಾ
ಅವಸರ ಮಾಡಿದ್ರೆ ಓಂ ನಮಃ ಶಿವಾಯ !
ನಿಂತು ನೋಡಿ ನಡೆದರೆ ದಾರಿ ಸುಗಮ
ಒಂಚೂರು ಯಾಮಾರಿದರೆ ಸಾವಿನ ಸಮಾಗಮ!!
ಅವಸರ ಮಾಡಿದ್ರೆ ಓಂ ನಮಃ ಶಿವಾಯ !
ನಿಂತು ನೋಡಿ ನಡೆದರೆ ದಾರಿ ಸುಗಮ
ಒಂಚೂರು ಯಾಮಾರಿದರೆ ಸಾವಿನ ಸಮಾಗಮ!!
* * * * *
ಬದುಕೇ ಹೀಗೆ ಹರಿಯುವ ನದಿಯ ಹಾಗೆ
ಅಡೆತಡೆಗಳ ದಾಟಿ ದಾರಿ ಹುಡುಕಿ ಚಲಿಸಬೇಕು ನಿರಂತರ
ನಿಂತಾಗ ಚಲನ, ಜೀವಜಲದ ಮರಣ
ಕಷ್ಟನಷ್ಟಗಳೇನೇ ಇರಲಿ ಬದುಕು ಸದಾ ಸಾಗುತಲಿರಲಿ.
ಅಡೆತಡೆಗಳ ದಾಟಿ ದಾರಿ ಹುಡುಕಿ ಚಲಿಸಬೇಕು ನಿರಂತರ
ನಿಂತಾಗ ಚಲನ, ಜೀವಜಲದ ಮರಣ
ಕಷ್ಟನಷ್ಟಗಳೇನೇ ಇರಲಿ ಬದುಕು ಸದಾ ಸಾಗುತಲಿರಲಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ