ಮಂಗಳವಾರ, ಮೇ 19, 2015

ಸಖಿ ಗೀತೆ...80

ಸಖಿ.....

ಕೆಲವರಿರ್ತಾರೆ
ರಣಚಂಡಿಯರು
ಜಗಮಂಡಿಯರು....

ಕೈಮುಗಿದು ಕಾಲಿಡಿದು
ಸರಿದಾರಿ ತೋರಿದರೂ
ಜಗ್ಗುವುದಿಲ್ಲ ಯಾವುದಕ್ಕೂ
ಬಗ್ಗುವುದಿಲ್ಲ....

ಬುದ್ದಿ ಹೇಳಿದರೆ
ಗುದ್ದಾಡುತ್ತಾರೆ,
ಬೈದು ಹೇಳಿದರೆ
ಗುಲ್ಲೆಬ್ಬಿಸುತ್ತಾರೆ....

ಇಂತವರ ಜೊತೆ
ಬದುಕಲ್ಲಿ ಏಗುವವರ
ಚರಣ ಪಾದ ಪದ್ಮ ಕಮಲಗಳಿಗಿದೊ
ಶಿರಸಾಷ್ಟಾಂಗ ನಮಸ್ಕಾರ..!

ಹೆಮ್ಮಾರಿಗಳ 
ಹೆಣ್ಣಾಗಿಸಲು
ಬೇಕಾಗಿದೆ 
ಹೊಸ ಅವಿಷ್ಕಾರ...!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ