ಮಂಗಳವಾರ, ಮೇ 19, 2015

ಸಖಿ ಗೀತೆ.....53

ಸಖಿ...

ನೊಂದವರ ನಾಡಲ್ಲಿ 
ಒಬ್ಬನೇ ನಗುತ್ತಿದ್ದರೆ
ಹುಚ್ಚನೆನ್ನುತ್ತಾರೆ..

ಹುಚ್ಚರೂರಲ್ಲಿ
ಬುದ್ದಿಜೀವಿಯನ್ನೂ
ಮತಿಹೀನನೆನ್ನುತ್ತಾರೆ.

ನೋಂದವರಲ್ಲಿ ನಗೆಹುಟ್ಟಿಸಿ
ಹುಚ್ಚರಲ್ಲಿ ಮತಿ ಹೆಚ್ಚಿಸುವವರು
ಮಹಾತ್ಮನೆನಿಸಿಕೊಳ್ಳುತ್ತಾರೆ.


 -       ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ