ಸೋಮವಾರ, ಮೇ 18, 2015

ಸಖಿ ಗೀತೆ....30



ಸಖಿ.....


ರೈತಾ ಮತ್ತು ಕವಿತಾ
ಎರಡೂ ಒಂದೇ.....
ಎಷ್ಟೇ ಗೇಯ್ದರೂ ರೈತ
ಲಾಭಾ ಅನ್ನೋದು ಇಲ್ಲಾ!
ಎಷ್ಟೇ ಬರೆದರೂ ಕವಿತಾ
ಕೇಳೋ ಕಿವಿಗಳು ಇಲ್ಲ!
* * * * *

ಕಾವ್ಯ ಬರಿಯೋದು
ಬುದ್ದಿ ಹೇಳೋದಕ್ಕಲ್ಲ
ಬುದ್ದಿ ಕಲಿಯೋದಕ್ಕ
ಅಂದ್ಕೊಂಡವಾ ಕವಿ !
* * * * *

ಕಿವುಡಾದಾಗ
ಕವಿತೆ ಕೇಳುವ ಕಿವಿಗಳು,
ಹುಟ್ಟಿಕೊಳ್ಳುತ್ತಾರೆ
ಫೇಸ್ ಬುಕ್ ಕವಿಗಳು.

ಕುರುಡಾದಾಗ
ಪ್ರಜೆಗಳನ್ನಾಳುವ ಪ್ರಭುಗಳು,
ಪ್ರತಿಭಟಿಸುತ್ತಾರೆ
ಗಟ್ಟಿದ್ವನಿಯಲ್ಲಿ ನೆಟ್ಟಿಗರು.

ಮೂಕವಾದಾಗ
ದಮನಿತರ ದ್ವನಿಗೆ ಮಾಧ್ಯಮಗಳು,
ಇಂಟರನೆಟ್ ತುಂಬಾ
ಕಾಮೆಂಟುಗಳು.

* * * * *

ಥೂ! ಕವಿತೆ ಬರೆಯೋದು ಕೆಲಸಾನಾ?
ಲಾಭಾ ಇಲ್ಲದ್ದೊಂದು ದುಡಿಮೇನಾ? ಅಂತಾರಲ್ಲಾ !!!
ಎಷ್ಟೇ ಗಳಿಸಿ ಎಷ್ಟೇ ಉಳಿಸಿ ಕೊಂಡ್ಕೋಬಹುದಾ ನೆಮ್ಮದೀನಾ!
ಒಳ್ಳೇ ಕವಿತೆ ಬರ್ದು ಓದಿ ನೋಡಿ ಕಾಣಬಹುದು ಸ್ವರ್ಗಾನಾ !!

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ