ಸಖಿ.....
ದಾಸ ನಾನು
ದೇವಿ ನೀನು
ಕಾಣಿಕೆ ನಾನೇನು ಕೊಡಲೇ
ದೇವಿ ನೀನು
ಕಾಣಿಕೆ ನಾನೇನು ಕೊಡಲೇ
ಶಬ್ದಗಳ ಮಣಿ
ಕವಿತೆಯಲ್ಲಿಟ್ಟು
ಪೋಣಿಸಿ ಕೊಡಲೇ,
ಕವಿತೆಯಲ್ಲಿಟ್ಟು
ಪೋಣಿಸಿ ಕೊಡಲೇ,
ಹೃದಯವ
ಹೂವಲಿಟ್ಟು
ನ್ಯೆವೇದ್ಯ ಮಾಡಲೇ.
ಹೂವಲಿಟ್ಟು
ನ್ಯೆವೇದ್ಯ ಮಾಡಲೇ.
ಇರುವುದೆಲ್ಲವ
ಬಿಟ್ಟು
ನಿನ್ನ ಜೊತೆಗೆ
ಓಡಿಬರಲೆ,
ನಿನ್ನ ಜೊತೆಗೆ
ಓಡಿಬರಲೆ,
ನೆತ್ತರಲ್ಲಿ
ರಂಗವಲ್ಲಿ
ಚಿತ್ತಾರ ಬಿಡಿಸಲೇ.
ರಂಗವಲ್ಲಿ
ಚಿತ್ತಾರ ಬಿಡಿಸಲೇ.
ಈ ಪ್ರಾಣ
ಬಿಟ್ಟು
ಬೆರೇನೇ ಕೇಳು
ಕೊಡುವೆನು ಬಾಲೆ,
ಬೆರೇನೇ ಕೇಳು
ಕೊಡುವೆನು ಬಾಲೆ,
ದಾಸ ನಾನು
ದೇವಿ ನೀನು
ಕಾಣಿಕೆ ಏನು ಕೊಡಲೇ....
ದೇವಿ ನೀನು
ಕಾಣಿಕೆ ಏನು ಕೊಡಲೇ....
ಎಂದೆಷ್ಟೇ
ಈಪರಿ
ಕೇಳಿದರು ಈ
ಮೌನ ಯಾಕಲೇ...
ಕೇಳಿದರು ಈ
ಮೌನ ಯಾಕಲೇ...
ಆದೆಷ್ಟೇ
ಹರಿಸಿದರೂ
ಕಣ್ಣಿರ ಹೊಳೆ
ಕಲ್ಲು ಕರಗದೇ...
ಕಣ್ಣಿರ ಹೊಳೆ
ಕಲ್ಲು ಕರಗದೇ...
ಕ್ಯೆಗೆಟುಕದ
ದ್ರಾಕ್ಷಿ
ಹುಳಿಯೆಂದು
ಹೊರಟು ಹೋಗಲೇ ?
ಹುಳಿಯೆಂದು
ಹೊರಟು ಹೋಗಲೇ ?
ಇಂದಲ್ಲಾ
ನಾಳೆ
ಕರಗೀತು ಕತ್ತಲೆಂದು
ಕಾಯುತಿರಲೇ !
ಕರಗೀತು ಕತ್ತಲೆಂದು
ಕಾಯುತಿರಲೇ !
ಇರಲಿ ದಯೆ
ಇದೆಂತಾ ಮಾಯೆ
ಬದುಕಲೇ ಇಲ್ಲಾ ಸಾಯಲೇ ?
ಇದೆಂತಾ ಮಾಯೆ
ಬದುಕಲೇ ಇಲ್ಲಾ ಸಾಯಲೇ ?
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ