ಸಖಿ....
ಜನತೆ
ಗುಡಿ ಸುತ್ತುವುದು
ದೇವರ ಭಜಿಸುವುದು
ಪೂಜಾರ್ಚನೆ ಮಾಡುವುದು...
ಗುಡಿ ಸುತ್ತುವುದು
ದೇವರ ಭಜಿಸುವುದು
ಪೂಜಾರ್ಚನೆ ಮಾಡುವುದು...
ಪ್ರದಕ್ಷಣೆ ಹಾಕಿ
ದಕ್ಷಿಣೆ ಕೊಟ್ಟು
ಪಾಪ ಪರಿಹಾರ
ಮಾಡಿಕೊಳ್ಳುವುದೆಲ್ಲಾ...
ದಕ್ಷಿಣೆ ಕೊಟ್ಟು
ಪಾಪ ಪರಿಹಾರ
ಮಾಡಿಕೊಳ್ಳುವುದೆಲ್ಲಾ...
ದೇವರಾಣೆ
ಭಕ್ತಿಯಿಂದಲ್ಲ
ಕೇವಲ
ಭಯದಿಂದ......!
ಭಕ್ತಿಯಿಂದಲ್ಲ
ಕೇವಲ
ಭಯದಿಂದ......!
ಮನುಜನಿಗೆ ಕೇಳಿದ್ದೆಲ್ಲಾ ಸಿಕ್ಕಿದ್ದರೆ
ಬಯಸಿದ್ದೆಲ್ಲಾ ದಕ್ಕಿದ್ದರೆ
ದೇವರೇ ತಾನಾಗುತ್ತಿದ್ದ
ಭಗವಂತ ಗಡಿಪಾರಾಗುತ್ತಿದ್ದ....!!
ಬಯಸಿದ್ದೆಲ್ಲಾ ದಕ್ಕಿದ್ದರೆ
ದೇವರೇ ತಾನಾಗುತ್ತಿದ್ದ
ಭಗವಂತ ಗಡಿಪಾರಾಗುತ್ತಿದ್ದ....!!
ಭಯಹುಟ್ಟಿಸಿ
ಭಗವಂತನ
ಸೃಷ್ಟಿಸಿದವರು....
ಭ್ರಮೆ ಹುಟ್ಟಿಸಿ
ಕರ್ಮಸಿದ್ದಾಂತ
ಪ್ರತಿಪಾದಿಸಿದವರು...
ಧರ್ಮ-ದೇವರ ಹೆಸರಲ್ಲಿ
ಪುಣೀತರಾದರು.....!!!
ಭಗವಂತನ
ಸೃಷ್ಟಿಸಿದವರು....
ಭ್ರಮೆ ಹುಟ್ಟಿಸಿ
ಕರ್ಮಸಿದ್ದಾಂತ
ಪ್ರತಿಪಾದಿಸಿದವರು...
ಧರ್ಮ-ದೇವರ ಹೆಸರಲ್ಲಿ
ಪುಣೀತರಾದರು.....!!!
ದುಡಿದುಡಿದು ಸವೆದವರು,
ಮೌಢ್ಯಗಳ ನಂಬಿದವರು....
ಶತಶತಮಾನಗಳಿಂದ
ದೇವರ ಪಾದಕೆ ಶರಣಾದರು...
ಧರ್ಮದ ದಲ್ಲಾಳಿಗಳು
ದೇವರಾದರು....!!!
ಮೌಢ್ಯಗಳ ನಂಬಿದವರು....
ಶತಶತಮಾನಗಳಿಂದ
ದೇವರ ಪಾದಕೆ ಶರಣಾದರು...
ಧರ್ಮದ ದಲ್ಲಾಳಿಗಳು
ದೇವರಾದರು....!!!
-ಶಶಿ ಯಡಹಳ್ಳಿ