ಬುಧವಾರ, ಜೂನ್ 10, 2015

ಸಖಿ ಗೀತೆ......340

ಸಖಿ...

" ಸಮಾನತೆ ಸಿಗುವವರೆಗೂ
ರಾಜಿ ರಹಿತ ಹೋರಾಟ,
ಹಸನಾಗಲಿ ದುಡಿಯುವವರ ಬಾಳು....

ಕೆಚ್ಚಿಲ್ಲದ ಕಿಚ್ಚಿಲ್ಲದ
ನರಜನ್ಮ ಯಾಕೆ
ಬೇಕು ಹೇಳು...."

ಎಂದೆಲ್ಲಾ
ಯುವಕರಾಗಿದ್ದ ನಮ್ಮ
ತಲೆಗೆ ಹುಳುಬಿಟ್ಟ
ಅಂದಿನ ಕ್ರಾಂತಿಕಾರಿ..

ಇಂದು ಸರಕಾರಿ
ಕೃಪಾ ಪೋಷಿತ
ಪ್ರಾಧಿಕಾರದ ಅಧಿಕಾರಿ....!

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ