ಬುಧವಾರ, ಜೂನ್ 10, 2015

ಸಖಿ ಗೀತೆ......307

ಸಖಿ...

ಆಳುವ ವ್ಯವಸ್ಥೆ
ಸೃಷ್ಟಿಸುವ ಅಪಾರ
ದುರಂತಗಳಲಿ...

ಆಳುವವರ ಊಳಿಗದಲ್ಲಿರುವ
ಕವಿ, ಕಲಾವಿದ
ಬುದ್ದಿಜೀವಿಗಳ
ಪಾಲೂ ಇದೆ......

ಸತ್ತನಂತರವೂ
ಜನರೆದೆಯಲಿ
ಬದುಕಿರಬೇಕೆಂದರೆ....

ಧಣಿಗಳ ದಬ್ಬಾಳಿಕೆ
ಧಿಕ್ಕರಿಸಿ...
ದಮನಿತರ ಬಾಳಿಗೆ
ಬೆಂಗಾವಲಾಗುವ
ಸವಾಲಿದೆ....

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ