ಸಖಿ.....
ಕವಿಗಳಿಗಿರಬೇಕು ಬದ್ದತೆ
ಓದುಗರಿಗೂ ಬೇಕು ಸಿದ್ದತೆ.....
ಕವಿತೆಗಳೇನು ಸುಮ್ಮನೇ ಸಿಕ್ಕುವುದೇ
ಓದಿದಾಕ್ಷಣ ಕವನ ದಕ್ಕುವುದೇ.....?
ಓದುಗರಿಗೂ ಬೇಕು ಸಿದ್ದತೆ.....
ಕವಿತೆಗಳೇನು ಸುಮ್ಮನೇ ಸಿಕ್ಕುವುದೇ
ಓದಿದಾಕ್ಷಣ ಕವನ ದಕ್ಕುವುದೇ.....?
ಈ ಕವಿತೆಗಳೇ ಹೀಗೆ
ದಕ್ಕಿದಷ್ಟು ದಕ್ಕಿಸಿಕೊಳ್ಳಬೇಕು...
ಸಿಕ್ಕಷ್ಟು ಅರಗಿಸಿಕೊಳ್ಳಬೇಕು
ಅರ್ಥವಾಗದಿದ್ದರೂ ಯತ್ನಿಸಬೇಕು....
ದಕ್ಕಿದಷ್ಟು ದಕ್ಕಿಸಿಕೊಳ್ಳಬೇಕು...
ಸಿಕ್ಕಷ್ಟು ಅರಗಿಸಿಕೊಳ್ಳಬೇಕು
ಅರ್ಥವಾಗದಿದ್ದರೂ ಯತ್ನಿಸಬೇಕು....
ಆದರೆ...ಯಾರಿಗುಂಟು ಸಮಯ
ಕಾವ್ಯದಾಳಕ್ಕಿಳಿದು ಸಂಕೇತ ಒಡೆದು
ರೂಪಕ ಶಬ್ದಸಾಗರ ಕಡೆದು
ಕಾವ್ಯಾಮೃತ ಸವಿಯುವ ಆಶಯ....!
ಕಾವ್ಯದಾಳಕ್ಕಿಳಿದು ಸಂಕೇತ ಒಡೆದು
ರೂಪಕ ಶಬ್ದಸಾಗರ ಕಡೆದು
ಕಾವ್ಯಾಮೃತ ಸವಿಯುವ ಆಶಯ....!
ಕಾವ್ಯಕನ್ನಿಕೆ ಬರೀ ಕವಿಗಳಿಗಲ್ಲ
ಕಾವ್ಯಾಸಕ್ತರಿಗೂ ಒಲಿಯಬೇಕು...
ಕಾವ್ಯಲೋಕದ ವಿಹಾರಿಗಳಿಗೆಲ್ಲ
ಅಧಮ್ಯ ಅನುಭಾವ ದಕ್ಕಬೇಕು...!!
ಕಾವ್ಯಾಸಕ್ತರಿಗೂ ಒಲಿಯಬೇಕು...
ಕಾವ್ಯಲೋಕದ ವಿಹಾರಿಗಳಿಗೆಲ್ಲ
ಅಧಮ್ಯ ಅನುಭಾವ ದಕ್ಕಬೇಕು...!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ