ಮಂಗಳವಾರ, ಜೂನ್ 9, 2015

ಸಖಿ ಗೀತೆ.....299

ಸಖಿ.....

ಕವಿಗಳಿಗಿರಬೇಕು ಬದ್ದತೆ
ಓದುಗರಿಗೂ ಬೇಕು ಸಿದ್ದತೆ.....
ಕವಿತೆಗಳೇನು ಸುಮ್ಮನೇ ಸಿಕ್ಕುವುದೇ
ಓದಿದಾಕ್ಷಣ ಕವನ ದಕ್ಕುವುದೇ.....?

ಈ ಕವಿತೆಗಳೇ ಹೀಗೆ
ದಕ್ಕಿದಷ್ಟು ದಕ್ಕಿಸಿಕೊಳ್ಳಬೇಕು...
ಸಿಕ್ಕಷ್ಟು ಅರಗಿಸಿಕೊಳ್ಳಬೇಕು
ಅರ್ಥವಾಗದಿದ್ದರೂ ಯತ್ನಿಸಬೇಕು....

ಆದರೆ...ಯಾರಿಗುಂಟು ಸಮಯ
ಕಾವ್ಯದಾಳಕ್ಕಿಳಿದು ಸಂಕೇತ ಒಡೆದು
ರೂಪಕ ಶಬ್ದಸಾಗರ ಕಡೆದು
ಕಾವ್ಯಾಮೃತ ಸವಿಯುವ ಆಶಯ....!

ಕಾವ್ಯಕನ್ನಿಕೆ ಬರೀ ಕವಿಗಳಿಗಲ್ಲ
ಕಾವ್ಯಾಸಕ್ತರಿಗೂ ಒಲಿಯಬೇಕು...
ಕಾವ್ಯಲೋಕದ ವಿಹಾರಿಗಳಿಗೆಲ್ಲ
ಅಧಮ್ಯ ಅನುಭಾವ ದಕ್ಕಬೇಕು...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ