ಸಖಿ....
ಇಂದು ಮತ್ತೊಂದು
ಹೊಸ ದಿನ,
ನುಡಿಯಲಿ ಮನ
ಉಲ್ಲಾಸದ ಗಾನ.....
ಹೊಸ ದಿನ,
ನುಡಿಯಲಿ ಮನ
ಉಲ್ಲಾಸದ ಗಾನ.....
ದಿನ ಬೆಳಗಾದರೆ
ಉತ್ತಮ ನಾಳೆಗಳಿಗಾಗಿ
ದುಡಿಯುವ ಧಾವಂತ,
ಉತ್ತಮ ನಾಳೆಗಳಿಗಾಗಿ
ದುಡಿಯುವ ಧಾವಂತ,
ಶ್ರೀಮಂತ ಬದುಕು ಕಟ್ಟಲು
ಎದುರಿಸ ಬೇಕಿದೆ
ಹಲವಾರು ಅಡ್ಡಿ ಆತಂಕ...
ಎದುರಿಸ ಬೇಕಿದೆ
ಹಲವಾರು ಅಡ್ಡಿ ಆತಂಕ...
ಬದುಕು ಸುಸ್ಥಿರಗೊಂಡರೆ
ಮುಂದೆ ಮಕ್ಕಳ ಭವಿಷ್ಯ
ತದನಂತರ ಮೊಮ್ಮಕ್ಕಳ ವಿಷ್ಯ...
ಮುಂದೆ ಮಕ್ಕಳ ಭವಿಷ್ಯ
ತದನಂತರ ಮೊಮ್ಮಕ್ಕಳ ವಿಷ್ಯ...
ಕತಾಕಥಿತ ಗುರಿಯತ್ತ
ಹೀಗೆ ಸಾಗುತ್ತದೆ
ಬಹುತೇಕರ ಬದುಕು..
ಹೀಗೆ ಸಾಗುತ್ತದೆ
ಬಹುತೇಕರ ಬದುಕು..
ಮೇಣದ ಹಾಗೆ ಉರಿದು
ಕುಟುಂಬ ಪರಿವಾರಕ್ಕೆ
ನೀಡುತ್ತೇವೆ ಬೆಳಕು...
ಕುಟುಂಬ ಪರಿವಾರಕ್ಕೆ
ನೀಡುತ್ತೇವೆ ಬೆಳಕು...
ಇಷ್ಟೆಲ್ಲಾ ಮಾಡಿದರೂ ಕೊನೆಗೆ
ಜೊತೆಗಾರರ ಅಲಕ್ಷ
ಮಕ್ಕಳು ಮರಿಗಳ ನಿರ್ಲಕ್ಷ...
ಜೊತೆಗಾರರ ಅಲಕ್ಷ
ಮಕ್ಕಳು ಮರಿಗಳ ನಿರ್ಲಕ್ಷ...
ಲೆಕ್ಕಾಚಾರ ತಪ್ಪಿದರೆ ವೃದ್ದಾಶ್ರಮ
ಸತ್ತರೆ ಬೀದಿಗೆಳೆತಂದು
ಹಾಕುತ್ತಾರೆ ನಮ್ಮದೇ ಹೆಣ....
ಸತ್ತರೆ ಬೀದಿಗೆಳೆತಂದು
ಹಾಕುತ್ತಾರೆ ನಮ್ಮದೇ ಹೆಣ....
ಅಲ್ಲಿಗೆ ಮುಗಿಯಿತು ಬದುಕಿನ
ಸಂತೆ, ಜೀವನದ ಮಹೋನ್ನತ
ಗುರಿ ಮುಟ್ಟಿದಂತೆ.....!
ಸಂತೆ, ಜೀವನದ ಮಹೋನ್ನತ
ಗುರಿ ಮುಟ್ಟಿದಂತೆ.....!
ಕನಸಿದ ಸುಸ್ಥಿರ ನಾಳೆಗಳು
ಅಸ್ಥಿರಗೊಂಡಂತೆ, ಉರಿದುರಿದು
ಬೂದಿಯಾಯ್ತು ಬದುಕು ಜ್ವಾಲಾಮುಖಿಯಂತೆ
ಅಸ್ಥಿರಗೊಂಡಂತೆ, ಉರಿದುರಿದು
ಬೂದಿಯಾಯ್ತು ಬದುಕು ಜ್ವಾಲಾಮುಖಿಯಂತೆ
ಇದ್ಯಾರಿಗೂ ಗೊತ್ತಿಲ್ಲವೆಂದಲ್ಲ,
ಗೊತ್ತಿದ್ದೂ ಕೂಡಿಡುತ್ತೇವೆ
ಮನೆ ಮಂದಿಗೆಲ್ಲಾ....
ಗೊತ್ತಿದ್ದೂ ಕೂಡಿಡುತ್ತೇವೆ
ಮನೆ ಮಂದಿಗೆಲ್ಲಾ....
ಏನೇ ಹೇಳಿ ಬದುಕು ಇಷ್ಟೇನೆ,
ಈ ದುರಾಸೆಯ ಜಗದಲಿ
ನೆಮ್ಮದಿಯಾಗಿರೋದು ಕಷ್ಟಾನೇ...?
ಈ ದುರಾಸೆಯ ಜಗದಲಿ
ನೆಮ್ಮದಿಯಾಗಿರೋದು ಕಷ್ಟಾನೇ...?
- ಶಶಿ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ