ಮಂಗಳವಾರ, ಜೂನ್ 9, 2015

ಸಖಿ ಗೀತೆ.....305

ಸಖಿ...

"ಇಲ್ಲೇ ಇರಲೇ
ಸಾಕು ಸುಮ್ಮನ
ಎಲ್ಲಿ ಹೋದರರ
ಏನೈತಿ ಮಗನ...
ಅದ ದುಡಿತ
ಮತ್ತದ ಮಿಡಿತ...

ಹಳ್ಳೀಲಿದ್ರ
ಸಂಬಂಧಗಳಾದ್ರೂ
ಉಳೀತಾವ...
ಸಿಟೀಲೇನೈತಿ
ಮನುಷ್ಯತ್ವಾನ
ಸತ್ತುಹೋಗತಾವ...."

ಅಂತೆಲ್ಲಾ ಅಪ್ಪ
ಕಕ್ಕುಲಾತಿಯಿಂದ
ಹೇಳಿದಾ ಕೇಳಲಿಲ್ಲ....

ಈಗ ಸಿಟಿಎಂಬೋ
ಸಾಗರದಾಗ
ಯಾರಿಗ್ಯಾರೂ ದಿಕ್ಕಿಲ್ಲದ
ಅನಾಥ ಪ್ರೇತಾತ್ಮದಂಗ
ಅಲೀತಿದ್ದೀನಿ, ಅಪ್ಪ
ಹೇಳಿದ ಮಾತು
ಪ್ರತಿ ಕ್ಷಣ
ನೆನೀತಿದ್ದೀನಿ....

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ