ಬುಧವಾರ, ಜೂನ್ 10, 2015

ಸಖಿ ಗೀತೆ.....335

ತರಲೆ ಕಾವ್ಯ...
***********
ಸಖಿ....

ಪೇಜಾವರರ ಮಠದ ಹಿಂದೆ
ಸಾಬಿಯೊಬ್ಬನ ಮನೆಯಿಂದ
ದಿನವೂ ಕೋಳಿ ಮಸಾಲೆ ವಾಸನೆ
ಹಾರವರಿಗೆ ಸಹಿಸಲಾರದ ಯಾತನೆ...

ಬೇಸತ್ತ ಬ್ರಾಹ್ಮಣರು
ಜಗದ್ಗುರುಗಳಿಗೆ ಕೊಟ್ಟರು ದೂರು..
ಸಾಬಿಯನ್ನು ಕರೆಸಿ ಹಿಂದೂವಾಗಲು
ಪ್ರೇರೇಪಿಸಿದರು ಪೇಜಾವರರು..

ಕೊನೆಗೂ ಒಪ್ಪಿದ ಸಾಬಿಯ
ತಲೆಮೇಲೆ ಚಿಮುಕಿಸಿ ನೀರು
ಜಗದ್ಗುರುಗಳೆಂದರು
'ಮುಸ್ಲಿಂ ಅಗಿ ಹುಟ್ಟಿದೆ
ಮುಸ್ಲಿಂ ಆಗಿ ಬೆಳೆದೆ
ಇನ್ಮೇಲೆ ನೀನು ಹಿಂದೂ
ಮರೆಯಬೇಡ ಎಂದೂ...'

ಮರುದಿನ ಮತ್ತೆ ಆತನ
ಮನೆಯಿಂದ ಕೋಳಿ ವಾಸನೆ..
ಬೆಚ್ಚಿ ಬಿದ್ದ ಹಾರವರಿಂದ
ಗುರುಗಳಿಗೆ ದೂರು ರವಾನೆ....

ಸ್ವತಃ ಗುರುಗಳೇ ಓಡಿ ಬಂದರು
ಸಾಬಿಯ ಕಂಡು ಮೂರ್ಚೆ ಹೋದರು
ಆತ ಕೋಳಿಯ ತಲೆ ಮೇಲೆ
ಚಿಮುಕಿಸಿ ನೀರು ಹೇಳುತ್ತಿದ್ದ
''ನೀನು ಕೋಳಿಯಾಗಿ ಹುಟ್ಟಿದ್ದೆ
ಕೋಳಿಯಾಗಿ ಬೆಳೆದೆ,
ಇನ್ಮೇಲೆ ನೀ ಆಲೂಗಡ್ಡೆ...''

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ