ಸಖಿ...
ಬತ್ತಿ ಬರಿದಾಗಿದ್ದ
ಅವಳೆದೆಯಲ್ಲಿ
ಆತ ಕೆರೆ ಕಟ್ಟಿ
ಪ್ರೀತಿಯ ವರತೆ
ಹರಿಸಿ ತುಂಬಿಸಿದ...
ಅವಳೆದೆಯಲ್ಲಿ
ಆತ ಕೆರೆ ಕಟ್ಟಿ
ಪ್ರೀತಿಯ ವರತೆ
ಹರಿಸಿ ತುಂಬಿಸಿದ...
ಕೆರೆಯ ನೀರು
ತುಳುತುಳುಕಿ
ಹೊರಚೆಲ್ಲದಿರಲೆಂದು
ಸೇತುವೆ ಕಟ್ಟಿ
ಚುಂಬಿಸಿದ...
ತುಳುತುಳುಕಿ
ಹೊರಚೆಲ್ಲದಿರಲೆಂದು
ಸೇತುವೆ ಕಟ್ಟಿ
ಚುಂಬಿಸಿದ...
ಪ್ರೀತಿ ಅತಿಯಾಗಿ
ಒಳಹರಿವು ಹೆಚ್ಚಾಗಿ
ಕೋಡಿ ಬಿದ್ದಿತು ಕೆರೆ
ಬತ್ತಿತು ಒಲವಿನಾಸರೆ
ಪ್ರೀತಿ ಕಂಡವರ ಪಾಲು....!!
ಒಳಹರಿವು ಹೆಚ್ಚಾಗಿ
ಕೋಡಿ ಬಿದ್ದಿತು ಕೆರೆ
ಬತ್ತಿತು ಒಲವಿನಾಸರೆ
ಪ್ರೀತಿ ಕಂಡವರ ಪಾಲು....!!
ಆಕೆ ಮುಖದಲ್ಲಿ
ಎಂತದೋ ಮಂದಹಾಸ..
ಆತನೀಗ ಎಲ್ಲ
ಕಳೆದುಕೊಂಡ ದೇವದಾಸ...
ಹುಟ್ಟಿತು ವಿರಹ ಗೀತೆ ಸಾಲು...!!!
ಎಂತದೋ ಮಂದಹಾಸ..
ಆತನೀಗ ಎಲ್ಲ
ಕಳೆದುಕೊಂಡ ದೇವದಾಸ...
ಹುಟ್ಟಿತು ವಿರಹ ಗೀತೆ ಸಾಲು...!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ