ಬುಧವಾರ, ಜೂನ್ 10, 2015

ಸಖಿ ಗೀತೆ.....322

ಸಖಿ...

ಟೀಕೆಗಳನು
ಸಹಿಸಿಕೊಳ್ಳಲು
ಸಾಮರ್ಥ್ಯವಿಲ್ಲದವರು
ಸಾರ್ವಜನಿಕ
ಜೀವನದಲ್ಲಿರಲು
ಅಯೋಗ್ಯರು....!

ವಿಮರ್ಶೆಗಳು
ಬೇಕು ಬದುಕಲಿ...
ತಪ್ಪಿದ್ದರೆ ಒಪ್ಪಿಕೊ
ಸಾಧ್ಯವಾದರೆ ತಿದ್ದಿಕೊ..

ಎಂದೂ ಕಾಣದು
ನಮಗೆ ನಮ್ಮ ಬೆನ್ನು
ತೋರಿಸಲಿರಬೇಕು
ವಿಮರ್ಶಕನ ಪೆನ್ನು...

ನಿನ್ನೊಳಗೆ
ಹುಟ್ಟಿಕೊಳ್ಳದಿದ್ದರೆ
ಒಬ್ಬ ಸ್ವವಿಮರ್ಶಕ
ಹೊರಗೆ ಹುಟ್ಟಿಕೊಳ್ಳುತ್ತಾನೆ.

ದಾರಿಬಿಟ್ಟು
ದಿಕ್ಕೆಟ್ಟು ಬೌದ್ಧಿಕ
ದಿವಾಳಿಯಾದಾಗ
ದಾರಿ ದೀಪವಾಗುತ್ತಾನೆ..

ನಿಂದಕರೆಂದು ದೂರಿ
ಆತ್ಮವಂಚನೆಯ ದಾರಿ
ಹಿಡಿದವರ ಬದುಕೊಂದು
ಬರೀ ಸುಳ್ಳಿನ ಸವಾರಿ....

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ