ಬುಧವಾರ, ಜೂನ್ 10, 2015

ಸಖಿ ಗೀತೆ......311

ಸಖಿ...

ಇಷ್ಟಪಟ್ಟವರು
ಅತ್ಯಮೂಲ್ಯ
ಸಮಯವನ್ನು
ನಿನಗಾಗಿ
ವ್ಯಯಸುತ್ತಾರೆಂಬುದೇ
ಕಾಳಜಿ ಕಳಕಳಿಯ
ಸಂಕೇತ....

ತಪ್ಪು ತಿಳಿಯದೇ
ಒಪ್ಪಿಕೊಂಡುಬಿಡು
ಸುಮ್ಮನಿರಬೇಡ
ಮೀನ ಮೇಷ
ಎಣಿಸುತ....

ಏನೇ ಕೊಟ್ಟರೂ
ಕೊಳ್ಳಲಾಗದ
ಅಪರೂಪದ
ಪ್ರತಿರೂಪ
ಸಮಯ...

ಕಾಲಕಳೆದರೆ
ಸಿಕ್ಕಿದ್ದೂ ದಕ್ಕುವುದಿಲ್ಲ,
ನಿರಾಕರಣೆ
ನಿತ್ಯಗೀತೆಯಾದರೆ
ನೆಮ್ಮದಿ ಮಟಾಮಾಯ...

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ