ಬುಧವಾರ, ಜೂನ್ 10, 2015

ಸಖೀ ಗೀತೆ.....330

ಸಖಿ...

ಹೆತ್ತವರು
ಸಂಪಾದನೆಯ
ಪಾಠ ಹೇಳುವ 
ಮೊದಲು ಮಗುವಿಗೆ
ಮಾನವೀಯತೆ
ಕುರಿತು ಅರಿವು
ಮೂಡಿಸಬೇಕಿದೆ.....

ಮಗು ಬೆಳೆದು ಮುಂದೆ
ಎಲ್ಲವನ್ನೂ ಎಲ್ಲರನ್ನೂ
ಹಣ ಅಧಿಕಾರ ಅಂತಸ್ತಿನಿಂದ
ಅಳೆಯುವ ಬದಲು
ಮನುಷ್ಯರನ್ನು ಮನುಷ್ಯರನ್ನಾಗಿ
ಗೌರವಿಸುವುದನ್ನು
ಕಲಿಯಬೇಕಾಗಿದೆ.....

ಧನದಾಹಿಗಳ
ಸೃಷ್ಟಿಸುವ ಬದಲು
ಮನೆಮನೆಗಳಲಿ
ಮಕ್ಕಳೆದೆಯಲ್ಲಿ
ಬಸವನ ಮಾನವೀಯತೆ
ಬುದ್ಧನ ಬೆಳಕು
ಬೆಳಗಬೇಕಿದೆ......

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ