ಬುಧವಾರ, ಜೂನ್ 10, 2015

ಸಖಿ ಗೀತೆ.......320

ಸಖಿ...

ಇಂದು ವಿಶ್ವ ಪರಿಸರ ದಿನ...

ನಾಯಕರು ಸಸಿ ನೆಡ್ತಾರೆ
ಪೋಟೋ ತೆಗಿಸ್ಕೊಂತಾರೆ
ಮೀಡಿಯಾದಲ್ಲಿ ಮಿಂಚತಾರೆ
ನಾಳೆ ಎಲ್ಲಾ ಮರ್ತೂ ಬಿಡ್ತಾರೆ...

ನೆಟ್ಟ ಸಸಿಗೆ ನೆಟ್ಟಗೆ
ಬೇಲಿ ಹಾಕಿ ಕಾಯೋರಾರು..
ನೀರು ಗೊಬ್ಬರ ಹಾಕೋರಾರು
ಗಿಡವಾಗಿ ಬೆಳಸೋರಾರು..?

ಪ್ರತಿ ವರ್ಷ ಪರಿಸರ ದಿನದಂದು
ನೆಟ್ಟ ಸಸಿಗಳೆಲ್ಲಾ ಈಗ
ಗಿಡವಾಗಿ ಬೆಳದಿದ್ರೆ
ಈ ಧರೆ ಯಾಕೆ ಧಗಧಗಿಸುತ್ತಿತ್ತು....?

ಅತ್ತ ಅಭಿವೃದ್ದಿಗಾಗಿ
ಗಿಡಮರ ಪ್ರಕೃತಿ ಸಂಹಾರ
ಇತ್ತ ಪರಿಸರದ ದಿನ
ಸಸಿ ನೆಡುವ ತರಾತುರಿ ಆತುರ....

ಎಲ್ಲಾ ಬರೀ ತೋರಿಕೆ
ಬಾಯ್ಬಿಟ್ಟರೆ ಬೂಟಾಟಿಕೆ....
ಎಲ್ಲಿದ್ದೀಯಾ ಸಾಲುಮರದ ತಿಮ್ಮಕ್ಕ
ನಿತ್ಯವೂ ಪರಿಸರ ದಿನ ಅಲ್ವೇನಕ್ಕಾ....?

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ