ಬುಧವಾರ, ಜೂನ್ 10, 2015

ಸಖಿ ಗೀತೆ....315

ಸಖಿ....

ಸುದೀರ್ಘ ಕಾಲಾವಧಿ
ಮತ್ತು
ಅಸಾಧ್ಯ ಒತ್ತಡಗಳಲ್ಲಿ

ಕಲ್ಲಿದ್ದಲು
ವಜ್ರವಾಗುವುದು...
ಕಲ್ಲು
ಖನಿಜವಾಗುವುದು...
ತ್ಯಾಜ್ಯ
ತೈಲವಾಗುವುದು....

ಹಾಗೆಯೇ...

ಮನುಷ್ಯರೇಕೆ
ಕಾಲಕ್ರಮದಲ್ಲಿ
ಮಾಗಬಾರದು...

ಬದುಕಿನ ಒತ್ತಡಗಳಲಿ
ನೊಂದು ಬೆಂದು
ಮಹಾತ್ಮರಾಗಬಾರದು...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ