ಬುಧವಾರ, ಜೂನ್ 10, 2015

ಸಖಿ ಗೀತೆ......327

ಸಖಿ....

ಈ ಪ್ರೀತಿ
ಅನ್ನೋದೇ ಹೀಗೆ
ಈರುಳ್ಳಿ ಇದ್ದ ಹಾಗೆ....

ಕಾಲಕ್ರಮದಲ್ಲಿ
ಬಿಡಿಸುತ್ತಾ ಹೋದಂತೆ
ಕೊನೆಗುಳಿಯೋದು
ಕಣ್ತುಂಬಾ ನೀರು
ಮನತುಂಬಾ ಬೇಜಾರು....

ಕಣ್ಣೀರು ಖಾತ್ರಿಯಾದ್ರೂ
ಈರುಳ್ಳಿ ಬಿಟ್ಟು
ಇರಲುಂಟೆ...?

ನಲಿವಿಗಿಂತಾ ನೋವು
ಹೆಚ್ಚೆಂದು ಗೊತ್ತಿದ್ದೂ
ಪ್ರೀತಿ ಇಲ್ಲದ ಬದುಕುಂಟೆ..?

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ