ಗುರುವಾರ, ಜನವರಿ 30, 2014

ಚುಟುಕು ಕವಿತೆಗಳು





ಸಮುದ್ರದ ಅಲೆಗಳು
ಏಳುತ್ತವೆ ಬೀಳುತ್ತವೆ.

ಪ್ರತಿ ಸಲ ಬಿದ್ದಾಗಲೂ
ಮತ್ತೆ ಪುಟಿದೇಳುತ್ತವೆ.

ಬದುಕಲ್ಲಿ ಸೋತವರಿಗೆ
ಪಾಠ ಹೇಳುತ್ತವೆ.

*  *  *  *

ಬದುಕಿನಲ್ಲಿ
ಯಾವ ತತ್ವಗಳಿಗೂ
ನಿಲುಕದ ಸತ್ಯಗಳಿವೆ.

ಪ್ರತಿಯೊಬ್ಬರ ಮನಸ್ಸಿನಲ್ಲಿ
ಯಾರ ಹಂಗಿಗೂ ನಿಲುಕದ
ಅವರವರದೇ ನಂಬಿಕೆಗಳಿವೆ.

*  *  *  *

ಧರ್ಮ ನಿರಪೇಕ್ಷ ಭಾರತದಲ್ಲಿ
ಧರ್ಮವೇ ಬಂಡವಾಳ.

ಬಂಡವಾಳಶಾಹಿ ದೇಶದಲ್ಲಿ
ಅಸಮಾನತೆಯೇ ಅಂತರಾಳ.

*  *  *  *

ಹಿಂದೆ ಮಾಡಿದ ತಪ್ಪುಗಳಿಗೆ
ಇಂದು ಕೊಡುವ ಹೆಸರು ಅನುಭವ.



            -ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ