ಸೋಮವಾರ, ಮಾರ್ಚ್ 10, 2014

ಪ್ರೇಮ ಕೂಡಾ ವ್ಯವಹಾರ :











ಸಿಡಿಯಿತು ಮಾತಿನ ಸಿಡಿಲು
ಛಿದ್ರ ಹೃದಯದ ಕಡಲು
ಏನಿದೇನಿದು ಕಣ್ಚಿತ್ತ ಗಮಲು.

ಮರೆತು ಬಿಡೆಂದರೆ ಮರೆಯುವುದೆಂತು
ಹೊರಟು ಬಿಡೆಂದರೆ ಹೊರಡುವುದೆಂತು
ಮನಸು ಕೊಟ್ಟು ಮರಳಿ ಪಡೆಯುವುದೆಂತು.

ಅಂತರಂಗದಲಿ ಕೋಲಾಹಲ
ಉದರದೊಳಗೆನೋ ಹಾಲಾಹಲ
ತಲ್ಲಣ ತಳಮಳ ಬದುಕೇ ದಾವಾನಲ.

ಬೇಕೆಂದಾಗ ಹತ್ತಿರವಂತೆ
ಬೇಡೆಂದಾಗ ದೂರಾಗುವುದಂತೆ
ಇದುವೇನಾ ಸಂಬಂಧ, ಇಷ್ಟೇನಾ ಅನುಬಂಧ.

ಯಾರನು ನಂಬಲಿ ಯಾರನು ಬಿಡಲಿ
ಒಲವಿನ ಹೃದಯ ಯಾರಿಗೆ ಕೊಡಲಿ
ಸುತ್ತಲು ಕತ್ತಲು ಮನವಿದು ಬೆತ್ತಲು.

ಪ್ರಣಯದ ಪರಿಗೆ ಸೋಲುವ ಮನಕೆ
ಸಗಟು ಸರಕು ಮಾರುವ ಜನಕೆ
ಪ್ರೀತಿಯೊಂದು ವ್ಯಾಪಾರ, ಪ್ರೇಮ ಕೂಡಾ ವ್ಯವಹಾರ.

-ಶಶಿಕಾಂತ ಯಡಹಳ್ಳಿ

( ಈ ಕವಿತೆಗೆ ಈಗ ಹನ್ನೆರಡು ವರ್ಷ, ಇನ್ನೂ ನನ್ನ ಮನದಾಳದಲ್ಲಿ ಜೀವಂತವಾಗಿದೆ. )





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ