ಸೋಮವಾರ, ಮಾರ್ಚ್ 10, 2014

ನನಗೇನಾಗಿದೆ?










ನನಗೇನಾಗಿದೆ
ಎಂದು ಕೇಳುವೆಯಲ್ಲಾ
ಹುಚ್ಚು ಹಿಡಿದಿದೆ.

ನೋಡಿದ ಕ್ಷಣ
ನಿನ್ನ ಕೂಡಿದೆ ಮನ
ಪ್ರೀತಿ ಮೂಡಿದೆ.

ಎಂಥಾ ತಲ್ಲಣ
ಹೃದಯ ಬಣಬಣ
ಏನೋ ಕಾಡಿದೆ.

ಒಂದು ಸ್ಪಂದನ
ಇನ್ನೊಂದು ಆಲಿಂಗನ
ಮನ ಕೇಳಿದೆ.

ಹೂವು ಅರಳಿದೆ
ಪರಿಮಳ ಬೀರಿದೆ
ದುಂಬಿ ಕಾದಿದೆ.

ತಾಳೆಲಾರೆನು
ವಿರಹದುರಿಯನು
ಜೊತೆ ಬೇಕಿದೆ.

ಏನೇನಾಗಿದೆ
ನಿಜ ಹೇಳಲಾಗದೇ
ಹುಚ್ಚು ಕೆರಳಿದೆ.

ಮನಸು ಮಾಯೆ
ಸೂತಕದಂತ ಛಾಯೆ
ಎಲ್ಲೋ ಸಾವಿದೆ.

-ಶಶಿಕಾಂತ ಯಡಹಳ್ಳಿ
(ದಶಕಗಳ ಹಿಂದೆ ಬರೆದ ಕವಿತೆ ಇದು, ಇಂದೂ ಕಾಡುತಿದೆ.)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ