ಸರ್ವಕಾಲಕ್ಕೂ
ಸಲ್ಲುವಂತ ಪ್ರೀತಿಗೆ
ತಡೆಯಾತಕೆ.
ಎಲ್ಲಕಾಲಕೂ
ಇರುವಂತ ಜಾತಿಗೆ
ಮಣೆಯಾತಕೆ.
ಮನಮನವು
ಬೆರೆತು ಒಂದಾಗಲು
ಅಪ್ಪಣೆ ಬೇಕೆ.
ಜಾತಿ ಮರೆತು
ಒಲಿದ ಜೀವಗಳು
ಸೇರಲಾರವೇ,
ಮದುವೆ ಮುಂಚೆ
ಏನಿದು ಜಾತಿ ಸಂಚೆ
ದೂರಮಾಡುವೆ.
ಎಂತಹ ಜನ
ಜೀವವಿರೋದಿತನ
ಸಹಿಸಲಾರೆ.
ಒಲುಮೆಯರ್ಥ
ತಿಳೀಯದ ಜಗದಿ
ಬದುಕೆ ವ್ಯರ್ಥ.
ಪ್ರೀತಿಯ ಪರಿ
ಅರಿಯದ ಬವದಿ
ಸಾವಿದು ಸೂಕ್ತ.
ಪ್ರೀತಿ ಸೂತಕ
ಆಚರಿಸಿ ಜನರೆ
ಹೋಗಿ ಬರುವೆ.
ಮುಂದಿನ ಜನ್ಮ
ಇದ್ದರೆ ನರನಾಗಿ
ಹುಟ್ಟದಿರುವೆ.
ನಿಮ್ಮಯ ಜಾತಿ
ನಿಮ್ಮಲಿರಲಿ ನಾನು
ಸಾಯುತಿರುವೆ.
ಜಗದ ತುಂಬಾ
ಪ್ರೇಮ ಒಂದೇ ಬಾಳಲಿ
ಜಾತಿ ಸಾಯಲಿ.
ಪ್ರೇಮಿಗಳೆಲ್ಲಾ
ಒಂದಾಗಿ ಜಾತಿಧರ್ಮ
ನಾಶವಾಗಲಿ.
ಮರಣಪತ್ರ
ಬರೆದು ಹೊರಟಿಹೆ
ಸಾವಿನೂರಿಗೆ.
ಸೂತಕ ಹೋಗಿ
ಒಲುಮೆ ಚಿಗಿತಾಗ
ಹುಟ್ಟಿಬರುವೆ.
-ಶಶಿಕಾಂತ ಯಡಹಳ್ಳಿ