ಮೋದಿ ಬಂದರು ದಾರಿ ಬಿಡಿ
ಮೋದಿ ಕೈಗೆ ದೇಶ ಕೊಡಿ.
ದೇಶದ ತುಂಬಾ ಹೊಡಿ ಬಡಿ ಕಡಿ
ಮುಸ್ಲಿಂರ ಗಡಿ ಪಾರು ಮಾಡಿ ಬಿಡಿ.
ಹೊಲೆಯ ದಲಿತ ಶೂದ್ರ ಸಂತಾನ
ಉಳ್ಳವರ ಮನೆ ಜೀತಕ್ಕಿರಲಿ ಬಿಡಿ.
ಮೋದಿ ಬಂದರು ದಾರಿ ಬಿಡಿ
ನೆತ್ತರ ಓಕಳಿ ಹರಿಯಲಿ
ಬಿಡಿ
ಪ್ಯಾಸಿಸ್ಟ್ ಪ್ರಭುತ್ವ ಆಳಲಿ ಬಿಡಿ.
ಸಾಹಿತಿ ಕಲಾವಿದರ, ಬುದ್ದಿಜೀವಿ ಎಡಪಂಥೀಯರ
ಗುಂಡಿಟ್ಟು ಗಲ್ಲಿಗೇರಿಸಲಿ ಬಿಡಿ.
ಮೋದಿ ಬಂದರು ದಾರಿ ಬಿಡಿ
ಅಂಬಾನಿ ಆದಾನಿ ಬಂಡವಾಳಿಗರಿಗೆ ದೇಶ ಮಾರಲಿ ಬಿಡಿ
ನ್ಯಾನೋ ಗೀನೋ ನೆಲ ನುಂಗಲಿ ಬಿಡಿ.
ಸಾಯುವುದಿದ್ದರೆ ರೈತರು ಸಾಯಲಿ ಬಿಡಿ
ಸಾಯದಿದ್ದರೆ ಭೂಮಿ ಕಿತ್ತು ಸಾಯಿಸಿ ಬಿಡಿ.
ಮೋದಿ ಬಂದರು ದಾರಿ ಬಿಡಿ
ಪ್ರಜಾಪ್ರಭುತ್ವ ಗತಕಾಲ ಸೇರಲು ಬಿಡಿ
ಮನುವಾದ ಸಂವಿಧಾನವಾಗಲಿ ಬಿಡಿ.
ಮಹಿಳೆಯರನ್ನು ಮನೆಯಲಿ ಕಟ್ಟಿಹಾಕಿ
ಪುರುಷರ ಸಾಮ್ರಾಜ್ಯ ವಿಜ್ರಂಭಿಸಲು ಬಿಡಿ.
ಮೋದಿ ಬಂದರು ದಾರಿ ಬಿಡಿ
ಓಟು ಹಾಕಿದವರು ಪಾಠ ಕಲಿಯಲಿ ಬಿಡಿ
ಪಡೆದ ನೋಟಿಗೆ ಬದುಕು ಒತ್ತೆ ಇಡಲಿ ಬಿಡಿ.
ಪುರೋಹಿತ ಪಂಡಿತರು ಸನಾತನವಾದಿಗಳು ಮೆರೆಯಲಿ ಬಿಡಿ
ಅರಳಿದ ಕಮಲ ಜನರ ಕಿವಿಗೇರಲಿ ಬಿಡಿ.
ಮೋದಿ ಬಂದರು ದಾರಿ ಬಿಡಿ
ಮೋದಿ ಕೈಗೆ ದೇಶ ಕೊಡಿ
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ