ಅಂಬೆ ಮಾದ್ರಿ ಗಾಂಧಾರಿ
ಮತ್ತದೇ ದ್ರೌಪತಿ ಕುಂತಿ
ಮಹಾಭಾರತದ ಕುಲುಮೆಯಲಿ
ನೊಂದು ಬೆಂದ ಸ್ತ್ರೀ ಸಂತತಿ.
ಅಂಬೆ ಅಗ್ನಿಗೆ, ಮಾದ್ರಿ ಚಿತೆಗೆ
ಗಾಂಧಾರಿ ಕತ್ತಲೆಗೆ ಬಲಿಯಾದರು.
ಕುಂತಿ ಕಂದಿಹೋದಳು, ದ್ರೌಪತಿ ಹಂಚಿಹೋದಳು
ಮಹಾಕಾವ್ಯ ಹೋಮಕೆ ಹವಿಸ್ಸಾದರು.
ಅಂಬೆ ಸೇಡಿಗೆ ಬಲಿಯಾದ ಭೀಷ್ಮ
ಗಾಂಧಾರಿ ಶಾಪಕೆ ಶವವಾದ ಕೃಷ್ಣ.
ಕುಂತಿ ಪುತ್ರಮೋಹಕೆ ಮೋಸಹೋದ ಕರ್ಣ
ದ್ರೌಪತಿ ಶಪತಕೆ ಧರಶಾಹಿ ಸುಯೋಧನ.
ಸಹನೆಗೊಂದು ಮಿತಿಯಿದೆ, ತಪ್ಪಿಗಿಷ್ಟು ಕ್ಷಮೆಯಿದೆ
ಎಲ್ಲ ಮೇರೆ ಮೀರಿ ಹೋದರೆ ಕೊನೆಗೆ ಸರ್ವನಾಶವಿದೆ.
ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ
ಒಲಿಸಿಕೊಂಡು ಕಂಡುಕೊಳ್ಳಿ ಬದುಕುವ ದಾರಿ.
-ಶಶಿಕಾಂತ ಯಡಹಳ್ಳಿ
('ನಟನ' ತಂಡದ ಅಗ್ನಿಪಥ ನಾಟಕದ ಪ್ರೇರಣೆಯಿಂದ ಬರೆದ ಕವಿತೆ)